ದಿನಾಂಕ:13.12.23 ರಂದು ಗುರುಮಿಠಕಲ್ ತಾಲೂಕಿನ ಕಂದಕೂರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಮೂಲ ಸೌಕರ್ಯ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಪರಿಶೀಲಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಆಹಾರ ಪದಾರ್ಥಗಳು ಮೂಲ ಸೌಕರ್ಯ ಕೊರತೆ ಆಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 14/12/2023
ದಿನಾಂಕ:06.12.2023 ರಂದು ಜಿಲ್ಲಾಧಿಕಾರಿಗಳು ಕನಾ೯ಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ( ವಿಮಾ) ಯೋಜನೆ ಅಡಿ,ಆಯ್ಕೆಯಾದ ಹುಣಸಗಿ ಪಟ್ಟಣದ ಹತ್ತಿ (ಮ.ಆ) ಬೆಳೆಯ ನಮೂನೆ-೨ ನ್ನು ಬೆಳೆ ಕಟಾವು ಪ್ರಯೋಗವನ್ನು ವಿಮಾ ಅಧಿಕಾರಿ, ಸಂಖ್ಯಾ ಸಂಗ್ರಹಣಾಧಿಕಾರಿ ಹಾಗೂ ಸಂಬಂಧಿಸಿದ ರೈತರ ಉಪಸ್ಥಿತಿಯಲ್ಲಿ ಕೃಷಿ ಅಧಿಕಾರಿ ನಡೆಸಿದ ಪ್ರಯೋಗವನ್ನು ಪರಿಶೀಲಿಸಲಾಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 08/12/2023
ದಿನಾಂಕ 06.12.2023 ರಂದು ಜಿಲ್ಲಾಧಿಕಾರಿಗಳು ಹುಣಸಗಿ ತಾಲೂಕಿನ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಮೂಲ ಸೌಕರ್ಯ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಅಡುಗೆ ಕೋಣೆ ವೀಕ್ಷಿಸಿ ಶಾಲೆಯಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬೇಕು ಶಾಲೆಯಲ್ಲಿ ಮಕ್ಕಳಿಗೆ ಕುಡಿವ ನೀರು, ಶೌಚಾಲಯ, ತರಗತಿ ಕೊಠಡಿ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಆಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 07/12/2023
ಇಂದು ಗೌರವಾನ್ವಿತ ಜಿಲ್ಲಾಧಿಕಾರಿ ಮೇಡಂ ಅವರ ಅಧ್ಯಕ್ಷತೆಯಲ್ಲಿ ಶೋರಾಪುರ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್, ಇಒ ತಾ.ಪಂ., ನಗರಸಭೆ ಮುಖ್ಯಾಧಿಕಾರಿ, ಎಲ್ಲಾ ಬಿಎಲ್ಒಗಳು ಮತ್ತು ಬಿಎಲ್ಒ ಮೇಲ್ವಿಚಾರಕರು, ಚುನಾವಣೆಗೆ ಸಂಬಂಧಿಸಿದ ಯುವ ಮತದಾರರ ನೋಂದಣಿ, ವಿಶೇಷ ಸಾರಾಂಶ ಪರಿಷ್ಕರಣೆ-2024 ಮತ್ತು ಇತರ ಚುನಾವಣಾ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 06/12/2023
ಇಂದು ಮಾನ್ಯ ಜಿಲ್ಲಾಧಿಕಾರಿ ಮಾಡಮ್ ಯಾದಗಿರಿ ಅವರ ಅಧ್ಯಕ್ಷತೆಯಲ್ಲಿ ಬಿ-ಗುಡಿಯ ಅಗ್ರಿ ಕಾಲೇಜಿನಲ್ಲಿ ತಹಶೀಲ್ದಾರ್, ಇಒಎಸ್ ತಾ.ಪಂ., ಎಲ್ಲಾ ಬಿಎಲ್ಒಗಳು ಮತ್ತು ಬಿಎಲ್ಒ ಮೇಲ್ವಿಚಾರಕರು, ಪಿಡಿಓಗಳು, ಕಾಲೇಜು ಪ್ರಾಂಶುಪಾಲರು ಮತ್ತು ಇತರ ಅಧಿಕಾರಿಗಳೊಂದಿಗೆ ಚುನಾವಣೆಗೆ ಸಂಬಂಧಿಸಿದ ಯುವ ಮತದಾರರ ನೋಂದಣಿ, ವಿಶೇಷ ಸಾರಾಂಶ ಪರಿಷ್ಕರಣೆ-2024 ಮತ್ತು ಇತರ ಚುನಾವಣಾ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 04/12/2023