ದಿನಾಂಕ 02.03.23 ರಂದು ಗುರುಮಿಟ್ಕಲ್ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸೆಕ್ಟರ್ ಅಧಿಕಾರಿಯಿಂದ ಇವಿಎಂ ಮಷೀನ್ ಕುರಿತು ಜಾಗೃತಿ ಮೂಡಿಸಲಾಯಿತು.
ಶಹಾಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಇವಿಎಂ ಮತಯಂತ್ರದ ಕುರಿತು ತಿಳುವಳಿಕೆ ನೀಡಲಾಯಿತು.
ಇಂದು ಹುಣಸಗಿ ತಹಶೀಲ್ದಾರ್ ಕಚೇರಿಯಲ್ಲಿ ಸೆಕ್ಟರ್ ಅಧಿಕಾರಿಯಿಂದ ಸಾರ್ವಜನಿಕರಿಗೆ ಇವಿಎಂ ಮತಯಂತ್ರದ ಕುರಿತು ತಿಳುವಳಿಕೆ ನೀಡಲಾಯಿತು.
ಯಾದಗಿರಿ ವಿಧಾನಸಭಾ ಮತಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಇವಿಎಂ ಮತಯಂತ್ರದ ಕುರಿತು ತಿಳುವಳಿಕೆ ನೀಡಲಾಯಿತು.
ಶಕರಪುರ ಮತ್ತು ಹಲಗೇರಾ ಗ್ರಾಮಗಳಲ್ಲಿ ಸೆಕ್ಟರ್ ಅಧಿಕಾರಿಯಿಂದ ಇವಿಎಂ ಪ್ರಾತ್ಯಕ್ಷಿಕೆ, ಹಾಗು 36- ಶೋರಾಪುರ ಕ್ಷೇತ್ರ, ಯಾದಗಿರಿ ಮತ ಕ್ಷೇತ್ರಗಳ ಸರ್ಕಾರೀ ಶಾಲೆಗಳು/ ಮತದಾನ ಕೇಂದ್ರಗಳಲ್ಲಿ ಪ್ರದರ್ಶನಗಳನ್ನು ನಡೆಸಲಾಯಿತು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಾಲ್ಕು ವಿಧಾನ ಸಭಾ ಕ್ಷೇತ್ರಗಳಿಗೆ ನೇಮಿಸಲಾದ ಸೆಕ್ಟರ್ ಹಾಗೂ ನೋಡಲ್ ಅಧಿಕಾರಿಗಳಿಗೆ ರಾಷ್ಟ್ರಮಟ್ಟದ ಮಾಸ್ಟರ್ ಟ್ರೇನರ್ ಡಾ. ಶಶಿಶೇಖರೆಡ್ಡಿರವರು ತರಬೇತಿ ನೀಡಿದರು.
ಜಿಲ್ಲೆಯ ವಿವಿಧ ತಹಸೀಲ್ದಾರ ಕಾರ್ಯಾಲದಲ್ಲಿ ಇವಿಎಂ ಯಂತ್ರಗಳ ಕುರಿತು ಸಾರ್ವಜನಿಕರಿ ಮಾಹಿತಿ ನೀಡಲಾಯಿತು..
ಯಾದಗಿರಿಯಲ್ಲಿ ಇವಿಎಂ ಪ್ರಾತ್ಯಕ್ಷಿಕೆ ಕೇಂದ್ರ
ದಿನಾಂಕ 08-02-2023 ರಂದು ಯಾದಗಿರಿ ನಗರದ ಬಸನಿಲ್ದಾಣದಲ್ಲಿ ಚುನಾವಣೆ ನಿಮಿತ್ಯ ಮತದಾನದ ಕುರಿತು ಕಾಲೇಜು ವಿಧ್ಯಾರ್ಥಿಗಳೊಂದಿಗೆ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶ್ರೀ ಅಜಯ ಭಾದೋ ಕರ್ನಾಟಕ ಅಪರ ಚುನಾವಣೆಯ ಆಯುಕ್ತರು, ಶ್ರೀ ಮನೋಜ ಕುಮಾರ ಮೀನಾ ಮಾನ್ಯ ಮುಖ್ಯ ಚುನಾವಣೆಯ ಅಧಿಕಾರಿಗಳು, ಶ್ರೀ ರಾಜೇಂದ್ರ ಚೋಳನ್ ಮಾನ್ಯ ಹೆಚ್ಚುವರಿ ಚುನಾವಣೆ ಅಧಿಕಾರಿಗಳು, ಶ್ರೀ ರಾಘವೇಂದ್ರ ಆರ್ ಮಾನ್ಯ ಈ ಹೆಚ್ಚುವರಿ ಚುನಾವಣೆಯ ಅಧಿಕಾರಿಗಳು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದು, ಇತರೆ ಜಿಲ್ಲಾ / ತಾಲೂಕ ಮಟ್ಟದ ಅಧಿಕಾರಿಗಳು/ ತಹಸೀಲ್ದಾರರು ಕಾಲೇಜು ವಿಧ್ಯಾರ್ಥಿಗಳು,ಸಾರ್ವಜನಿಕರು ಹಾಜರಿದ್ದರು
ಜಿಲ್ಲಾ SVEEP ಚಟುವಟಿಕೆಗಳು.