ಯಾದಗಿರಿಯಲ್ಲಿ ಇವಿಎಂ ಪ್ರಾತ್ಯಕ್ಷಿಕೆ ಕೇಂದ್ರ
ದಿನಾಂಕ 08-02-2023 ರಂದು ಯಾದಗಿರಿ ನಗರದ ಬಸನಿಲ್ದಾಣದಲ್ಲಿ ಚುನಾವಣೆ ನಿಮಿತ್ಯ ಮತದಾನದ ಕುರಿತು ಕಾಲೇಜು ವಿಧ್ಯಾರ್ಥಿಗಳೊಂದಿಗೆ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶ್ರೀ ಅಜಯ ಭಾದೋ ಕರ್ನಾಟಕ ಅಪರ ಚುನಾವಣೆಯ ಆಯುಕ್ತರು, ಶ್ರೀ ಮನೋಜ ಕುಮಾರ ಮೀನಾ ಮಾನ್ಯ ಮುಖ್ಯ ಚುನಾವಣೆಯ ಅಧಿಕಾರಿಗಳು, ಶ್ರೀ ರಾಜೇಂದ್ರ ಚೋಳನ್ ಮಾನ್ಯ ಹೆಚ್ಚುವರಿ ಚುನಾವಣೆ ಅಧಿಕಾರಿಗಳು, ಶ್ರೀ ರಾಘವೇಂದ್ರ ಆರ್ ಮಾನ್ಯ ಈ ಹೆಚ್ಚುವರಿ ಚುನಾವಣೆಯ ಅಧಿಕಾರಿಗಳು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದು, ಇತರೆ ಜಿಲ್ಲಾ / ತಾಲೂಕ ಮಟ್ಟದ ಅಧಿಕಾರಿಗಳು/ ತಹಸೀಲ್ದಾರರು ಕಾಲೇಜು ವಿಧ್ಯಾರ್ಥಿಗಳು,ಸಾರ್ವಜನಿಕರು ಹಾಜರಿದ್ದರು
ಜಿಲ್ಲಾ SVEEP ಚಟುವಟಿಕೆಗಳು.
ದಿನಾಂಕ 20.12.2022 ರಂದು ಮತದಾರರ ಪಟ್ಟಿ ವಿಶೇಷ ಸಂಕ್ಷೀಪ್ತ ಪರಿಷ್ಕರಣೆಸೂಪರ್ ಚೆಕ್ಕಿಂಗ್ ಗಾಗಿ ಸುರಪುರ ತಾಲೂಕಿನ ಸತ್ಯಂಪೇಟ ಮತ್ತು ಕೃಷ್ಣಾಪುರ,ಬಿಜಾಸಪುರ, ಗ್ರಾಮದ ಮನೆಗಳಿಗೆ ಭೇಟಿ ನೀಡಲಾಯಿತು.
ದಿನಾಂಕ 03.12.2022 ರಂದು ಮತದಾರರ ಪಟ್ಟಿ ಪರಿಷ್ಕರಣೆ ಮನೆ ಮನೆ ಸಮೀಕ್ಷೆ ಹಿನ್ನೆಲೆ ಯಾದಗಿರಿ , ವಡಿಗೇರಾ ತಾಲೂಕಿನ ವಿವಿಧ ಗ್ರಾಮಗಳ ಮತಗಟ್ಟೆಗಳಿಗೆ ಮತ್ತು ಮನೆಗಳಿಗೆ ಬೇಟಿ ನೀಡಲಾಯಿತು.
ದಿನಾಂಕ 26.11.2022 ರಂದು ಜಿಲ್ಲಾಡಳಿತದ ವತಿಯಿಂದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ದಿನಾಂಕ 25.11.2022 ರಂದು ಮತದಾರರ ಪಟ್ಟಿ ವಿಶೇಷ ಸಂಕ್ಷಿತ್ತ ಪರಿಷ್ಕರಣೆ 2023 ರ ಅಂಗವಾಗಿ ಯಾದಗಿರಿ ನಗರದ ಮತಗಟ್ಟೆ ಸಂಖ್ಯೆ 52,54 ರ ವ್ಯಾಪ್ತಿಯಲ್ಲಿ ಬರುವ ಮನೆ ಮನೆ ಸಮೀಕ್ಷೆ ಕಾರ್ಯದ ಪ್ರಗತಿಯನ್ನು ಪರಿಶೀಲನೆ ಮಾಡಲಾಯಿತು.
ದಿನಾಂಕ 24.11.2022ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಹೆಜ್ಜೆಗೊಂದು ದಾರಿ, ವಿದ್ಯಾರ್ಥಿಗಳೊಂದಿಗೆ ಸಂವಾದಲ್ಲಿ ಭಾಗವಹಿಸಲಾಯಿತು.
ದಿನಾಂಕ 17.11.2022 ರಂದು ಯಾದಗಿರಿ ನಗರದ ಸರ್ಕಾರಿ ಪ್ರೌಢಶಾಲೆ ಸ್ಟೇಶನ ಬಜಾರ ಶಾಲೆಯಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಎಸ್ ಟಿ ಇ ಪಿ ಎಸ್), ವರ್ಣಾಜ್ ಟೆಕ್ನಾಲಜಿಸ್ ತಾರೇ ಜಮೀನ್ ಪರ್ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಹಯೋಗದ “ಶಾಲೆಯ ಅಂಗಳದಲ್ಲೆ ಸಂಚಾರಿ ಡಿಜಿಟಲ್ ತಾರಾಲಯ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಧ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯ ವಿವಿಧ ಶಾಖೆಗಳ ಪರಿಚಯ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಹಾಗೂ ಸಹಾಯಕ ಆಯುಕ್ತರ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳ, ಜಿಲ್ಲಾ ಪಂಚಾಯತ ಮತ್ತು ವಿವಿಧ ಕಡೆ ಪ್ರತ್ಯಕ್ಷವಾಗಿ ವೀಕ್ಷಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ನೀಡಲಾಯಿತು